ಮಂಗಳೂರು : ಆಂಬುಲೆನ್ಸ್​ಗೆ ದಾರಿ ಬಿಡದೇ ಪುಂಡಾಟ : ಕಿಡಿಗೇಡಿ ಬಂಧನ

Mangaluru Ambulance Biker Arrest : ಮಂಗಳೂರು : ಆಂಬುಲೆನ್ಸ್​ಗಳು ಜೀವ ರಕ್ಷಿಸುವ ವಾಹನಗಳು. ಹೀಗಾಗಿ ಆಂಬುಲೆನ್ಸ್​ಗಳು ಸಂಚರಿಸುವಾಗ ರಸ್ತೆಯಲ್ಲಿ ವೇಗವಾಗಿ ಚಲಿಸುವ ಅನುವು ಮಾಡಿಕೊಡಬೇಕು ಎಂಬ ನಿಯಮವೇ ಇದೆ. ಆದರೂ ಕೂಡ ನಿನ್ನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಬಿ.ಸಿ ರೋಡ್​ನಲ್ಲಿ ಯುವಕನೊಬ್ಬ ಆಂಬುಲೆನ್ಸ್​ಗೆ ದಾರಿ ನೀಡದೆ ಪುಂಡಾಟ ಮೆರೆದಿದ್ದು ಇದೀಗ ಪೊಲೀಸ್​ ಠಾಣೆ ಅತಿಥಿಯಾಗಿದ್ದಾನೆ.

ಬಂಧಿತ ಬೈಕ್​ ಸವಾರನನ್ನು ಪುತ್ತೂರಿನ ಬೆಟ್ಟಂಪಾಡಿ ಗ್ರಾಮದ 38 ವರ್ಷದ ಮಹಮ್ಮದ್​ ಮನ್ಸೂರು ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ದ್ವಿಚಕ್ರ ವಾಹನ KA22C1382 ವಶಕ್ಕೆ ಪಡೆಯಲಾಗಿದೆ. ಬಂಟ್ವಾಳ ನಗರ ಪೊಲೀಸ್​ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.

Also Read : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟಿ ಕೋಟಿ ಮೋಸ

ನಿನ್ನೆ ಬಿಸ್ಲೆ ಘಾಟ್​ ಬಳಿ ಅಪಘಾತ ಸಂಭವಿಸಿತ್ತು. ಈ ವೇಳೆ ಗಾಯಾಳುವನ್ನು ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ಸಂದರ್ಭದಲ್ಲಿ ಬಿ.ಸಿ ರೋಡ್​ ಬಳಿಯಲ್ಲಿ ಎದುರಿಗೆ ಬಂದ ಬೈಕ್​ ಸವಾರ ಮುಹಮ್ಮದ್​ ಸುಮಾರು ಮೂರ್ನಾಲ್ಕು ಕಿಲೋಮೀಟರ್​ವರೆಗೂ ಆಂಬುಲೆನ್ಸ್​ಗೆ ದಾರಿ ಮಾಡಿಕೊಡದೇ ಪುಂಡಾಟ ಮೆರೆದಿದ್ದ.

ಈ ಸಂಬಂಧ ವಿಡಿಯೋ ಚಿತ್ರೀಕರಿಸಿಕೊಂಡಿದ್ದ ಆಂಬುಲೆನ್ಸ್​ ಸಿಬ್ಬಂದಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಬೈಕ್​ ಸವಾರನ ವಿರುದ್ಧ ಬಂಟ್ವಾಳ ನಗರ ಠಾಣಾ ಪೊಲೀಸರು ಕ್ರಮ ಕೈಗೊಂಡಿದ್ದಾರೆ .

Also Read : ಧರ್ಮಸ್ಥಳ ಬುರುಡೆ ಪ್ರಕರಣ : ಕೇಸ್‌ ರದ್ದತಿಗೆ ಹೈಕೋರ್ಟ್‌ ಮೆಟ್ಟಿಲೇರಿದ ಬೆನ್ನಲ್ಲೇ ಎಸ್‌ಐಟಿ ನೋಟಿಸ್‌

Mangaluru Ambulance Biker Arrest

Exit mobile version