ನ್ಯಾಷನಲ್​ ಹೆರಾಲ್ಡ್​ ಪ್ರಕರಣ : ವಿಚಾರಣೆಗೆ ಹಾಜರಾಗುವಂತೆ ಡಿ.ಕೆ ಶಿವಕುಮಾರ್​ಗೆ ನೋಟಿಸ್​

National Herald case: ದಶಕಗಳಿಂದ ವಿಚಾರಣೆ ಹಂತದಲ್ಲಿರುವ ನ್ಯಾಷನಲ್​ ಹೆರಾಲ್ಡ್​ ಪ್ರಕರಣದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್​ಗೆ ಹೊಸ ಸಂಕಷ್ಟ ಎದುರಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿಗಳಾದ ಸೋನಿಯಾ ಗಾಂಧಿ ಹಾಗೂ ರಾಹುಲ್​ ಗಾಂಧಿ ವಿರುದ್ಧ ಹೊಸ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು, ಡಿಕೆಶಿಗೂ ನೋಟಿಸ್​ ಕಳುಹಿಸಿದ್ದಾರೆ.

ಈ ಪ್ರಕರಣ ಸಂಬಂಧ ಡಿ.ಕೆ ಶಿವಕುಮಾರ್ ಪ್ರಬಲವಾದ ಮಾಹಿತಿ ಹೊಂದಿದ್ದಾರೆ ಎಂಬ ನಂಬಿಕೆ ದೆಹಲಿ ಪೊಲೀಸರದ್ದು. ಈ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್​ ನಿವಾಸಕ್ಕೆ ನೋಟಿಸ್​ ಕಳುಹಿಸಲಾಗಿದ್ದು, ಡಿಸೆಂಬರ್ 19ರ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಡಿ.ಕೆ ಶಿವಕುಮಾರ್​ ಹಾಗೂ ಡಿಕೆ ಸುರೇಶ್​ ಸಹೋದರರು ವೈಯಕ್ತಿಕವಾಗಿ 2.5 ಕೋಟಿ ರೂಪಾಯಿಗಳನ್ನು ಯಂಗ್​ ಇಂಡಿಯಾಗೆ ದೇಣಿಗೆ ರೂಪದಲ್ಲಿ ನೀಡಿದ್ದರು.ಅಲ್ಲದೇ ಡಿಕೆ ಅವರ ಟ್ರಸ್ಟ್​ನಿಂದಲೂ 2.5 ಕೋಟಿ ರೂಪಾಯಿ ದೇಣಿಗೆ ನೀಡಿರುವ ಆರೋಪ ಕೇಳಿ ಬಂದಿತ್ತು.

ಹೀಗಾಗಿ ಡಿಕೆ ಸಹೋದರರನ್ನು ಇಡಿ ವಿಚಾರಣೆಗೆ ಒಳಪಡಿಸಿತ್ತು. ಸೋನಿಯಾ ಗಾಂಧಿ ಹಾಗೂ ರಾಹುಲ್​ ಗಾಂಧಿ ವಿರುದ್ಧ ಅಕ್ಟೋಬರ್​ 3ರಂದು ಹೊಸ ಪ್ರಕರಣವೊಂದನ್ನು ದಾಖಲಿಸಿಕೊಳ್ಳಲಾಗಿದೆ.ಈ ಪ್ರಕರಣ ಸಂಬಂಧ ಡಿಕೆಶಿ ಪ್ರಬಲವಾದ ಮಾಹಿತಿಯೊಂದನ್ನು ಹೊಂದಿದ್ದಾರೆ ಎನ್ನಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಲಾಗಿದೆ.

Also Read: ಕಾಂಗ್ರೆಸ್​ ನಾಯಕ ಮಿಥುನ್​ ರೈ ಶಿಸ್ತು ಉಲ್ಲಂಘನೆ : ನೋಟಿಸ್​ ಜಾರಿ ಮಾಡಿದ ಎಐಸಿಸಿ

1998ರಲ್ಲಿ ಜವಹರಲಾಲ ನೆಹರೂ ಅವರು ಸ್ಥಾಪಿಸಿದ ಪತ್ರಿಕೆ ಇದಾಗಿದ್ದು , AJL ಈ ಪತ್ರಿಕೆಯ ಪ್ರಕಾಶನದ ಜವಾಬ್ದಾರಿ ಪಡೆದಿತ್ತು. 2008ರಲ್ಲಿ ಆರ್ಥಿಕ ಸಂಕಷ್ಟದಿಂದ AJL ಈ ಪತ್ರಿಕೆ ಸ್ಥಗಿತಗೊಳಿಸಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್​ ಪಕ್ಷದಿಂದ 90.25 ಕೋಟಿ ರೂಪಾಯಿ ಸಾಲ ಪಡೆದುಕೊಂಡಿತ್ತು.

ಕಾಂಗ್ರೆಸ್​ ಪಕ್ಷವು AJL ಕಂಪನಿಗೆ ನೀಡಿದ್ದ ಸಾಲವನ್ನು ಕಾಂಗ್ರೆಸ್​ ಪಕ್ಷವು 50 ಲಕ್ಷ ರೂಪಾಯಿಗಳಿಗೆ ಯಂಗ್​ ಇಂಡಿಯಾ ಕಂಪನಿಗೆ ವರ್ಗಾಯಿಸಿದೆ ಎಂಬುದು ಸುಬ್ರಮಣಿಯನ್​ ಸ್ವಾಮಿ ಅವರ ಆರೋಪವಾಗಿದೆ . ಈ ಯಂಗ್​ ಇಂಡಿಯಾ ಕಂಪನಿಯಲ್ಲಿ ರಾಹುಲ್​ ಗಾಂಧಿ ಹಾಗೂ ಸೋನಿಯಾ ಗಾಂಧಿ ಶೇಕಡಾ 76ರಷ್ಟು ಷೇರುಗಳನ್ನು ಹೊಂದಿದ್ದಾರೆ.

Also Read: Datta jayanti : ಕಾಫಿನಾಡಲ್ಲಿ ದತ್ತಜಯಂತಿಗೆ ವೈಭವದ ತೆರೆ : ದತ್ತಗೋರಿ ತೆರವಿಗೆ ದತ್ತಭಕ್ತರ ಆಗ್ರಹ

ಈ ಸಾಲದ ವರ್ಗಾವಣೆಯಿಂದ 2 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಆಸ್ತಿಯನ್ನು ಯಂಗ್​ ಇಂಡಿಯಾ ಕಂಪನಿಯು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪವನ್ನು ಸೋನಿಯಾ ಮತ್ತು ರಾಹುಲ್​ ಗಾಂಧಿ ಎದುರಿಸುತ್ತಿದ್ದಾರೆ.

Exit mobile version