ಮಹಾರಾಷ್ಟ್ರದಲ್ಲಿ ಶೇ. 5ರಷ್ಟು ಮುಸ್ಲಿಂ ಮೀಸಲಾತಿ ರದ್ದು; ಕಾಂಗ್ರೆಸ್‌ನಿಂದ ತೀವ್ರ ಆಕ್ರೋಶ

Maharashtra Goverment | Devendra Fadnavis | 5 percent reservation for muslims: ಮುಂಬೈ: ಮಹಾರಾಷ್ಟ್ರದ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಶೇ. 5ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ ದೇವೇಂದ್ರ ಫಡ್ನವಿಸ್ ನೇತೃತ್ವದ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಮಂಗಳವಾರ ಅಧಿಕೃತ ಸರ್ಕಾರಿ ನಿರ್ಣಯ ಪ್ರಕಟವಾಗಿದೆ.

ಹಿನ್ನೆಲೆ ಮತ್ತು ಸರ್ಕಾರದ ನಿರ್ಧಾರ

2014ರಲ್ಲಿ ಅಂದಿನ ಕಾಂಗ್ರೆಸ್-ಎನ್‌ಸಿಪಿ ಮೈತ್ರಿ ಸರ್ಕಾರವು ಮರಾಠರಿಗೆ ಶೇ. 16 ಮತ್ತು ಮುಸ್ಲಿಮರಿಗೆ ಶೇ. 5ರಷ್ಟು ಮೀಸಲಾತಿ ನೀಡಲು ಸುಗ್ರೀವಾಜ್ಞೆ ಹೊರಡಿಸಿತ್ತು. ಆದರೆ, ಈ ನಿರ್ಧಾರಕ್ಕೆ ಬಾಂಬೆ ಹೈಕೋರ್ಟ್ ತಡೆ ನೀಡಿತ್ತು. ನಂತರದ ದಿನಗಳಲ್ಲಿ ಸುಗ್ರೀವಾಜ್ಞೆಯು ಶಾಸನಸಭೆಯಲ್ಲಿ ಕಾನೂನಾಗಿ ಅಂಗೀಕಾರಗೊಳ್ಳದ ಕಾರಣ ಕಾಲಮಿತಿಯೊಳಗೆ ಅದು ರದ್ದಾಗಿತ್ತು. ಇದೀಗ 12 ವರ್ಷಗಳ ನಂತರ, ಸರ್ಕಾರವು ಈ ಹಳೆಯ ಆದೇಶಗಳನ್ನು ಮತ್ತು ಸುತ್ತೋಲೆಗಳನ್ನು ಅಧಿಕೃತವಾಗಿ ರದ್ದುಗೊಳಿಸಿದೆ.‌

ಚಿನ್ನಕ್ಕೆ ಸಿಗುವ ಸಾಲ ಬೆಳ್ಳಿಗೇಕಿಲ್ಲ? ಬ್ಯಾಂಕ್‌ಗಳ ಈ ನಡೆಯ ಹಿಂದಿನ ಅಸಲಿ ಸತ್ಯ ತಿಳಿಯಿರಿ

ವರದಿಯ ಮುಖ್ಯಾಂಶಗಳು:

ವಿರೋಧ ಪಕ್ಷಗಳ ಆಕ್ರೋಶ

ಸರ್ಕಾರದ ಈ ಕ್ರಮಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕಾಂಗ್ರೆಸ್ ಸಂಸದೆ ವರ್ಷಾ ಗಾಯಕ್ವಾಡ್ ಪ್ರತಿಕ್ರಿಯಿಸಿ, “ಸರ್ಕಾರವು ‘ಸಬ್ಕಾ ಸಾತ್, ಸಬ್ಕಾ ವಿಕಾಸ್’ ಎಂದು ಹೇಳುತ್ತಲೇ ಹಿಂದುಳಿದ ವರ್ಗಗಳನ್ನು ಕತ್ತಲೆಗೆ ತಳ್ಳುತ್ತಿದೆ. ಮೀಸಲಾತಿಯ ಹಕ್ಕನ್ನು ಕಸಿದುಕೊಳ್ಳುತ್ತಿರುವುದು ಸರ್ಕಾರದ ಬೂಟಾಟಿಕೆಯನ್ನು ತೋರಿಸುತ್ತದೆ,” ಎಂದು ಟೀಕಿಸಿದ್ದಾರೆ.

ಎಐಎಂಐಎಂ (AIMIM) ನಾಯಕ ಇಮ್ತಿಯಾಜ್ ಜಲೀಲ್ ಅವರು ವ್ಯಂಗ್ಯವಾಡಿದ್ದು, “ಇದು ಮುಸ್ಲಿಮರಿಗೆ ಸರ್ಕಾರ ನೀಡಿದ ‘ರಂಜಾನ್ ಉಡುಗೊರೆ’. ಆದರೆ ನಮ್ಮ ಸಮುದಾಯದ ಯುವಕರು ಶಿಕ್ಷಣದಿಂದ ವಂಚಿತರಾಗಬಾರದು, ಓದಿನ ಮೂಲಕ ಪ್ರಗತಿ ಸಾಧಿಸಬೇಕು,” ಎಂದು ಹೇಳಿದ್ದಾರೆ.

Exit mobile version