Digital fraud: ಡಿಜಿಟಲ್​ ವಂಚಕರ ಜಾಲಕ್ಕೆ ಬ್ರೇಕ್​ ಹಾಕಲು ಕೇಂದ್ರ ಸರ್ಕಾರ ದಿಟ್ಟ ಕ್ರಮ : ಇನ್ಮುಂದೆ ನಡೆಯಲ್ಲ ಸೈಬರ್​ ಕಳ್ಳರ ಕಾಟ

Digital fraud: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಡಿಜಿಟಲ್​ ಅರೆಸ್ಟ್​ನಂತಹ ಸೈಬರ್​ ವಂಚನೆ ಜಾಲಗಳು ಬೆಳಕಿಗೆ ಬರುತ್ತಲೇ ಇದೆ. ಸೈಬರ್ ವಂಚನೆಯಿಂದಾಗಿ ಅನೇಕರು ತಮ್ಮ ಜೀವಮಾನದ ಉಳಿತಾಯದ ಮೊತ್ತವನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಸೈಬರ್​ ವಂಚನೆಯ ಜಾಲಕ್ಕೆ ಬ್ರೇಕ್​ ಹಾಕಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.

ಈ ಸಂಬಂಧ ಹೊಸ ನಿಯಮ ರೂಪಿಸಿರುವ ದೂರ ಸಂಪರ್ಕ ಸಚಿವಾಲಯ (Department of Telecommunications), ದೇಶದಲ್ಲಿ ನ್ಮುಂದೆ ಮಾರಾಟವಾಗುವ ಎಲ್ಲಾ ಹೊಸ ಸ್ಮಾರ್ಟ್​ ಫೋನ್​​ಗಳಲ್ಲಿ ಸಂಚಾರ ಸಾಥ್​​ ಕಡ್ಡಾಯಗೊಳಿಸಲು ಸೂಚನೆ ನೀಡಿದೆ.

ಈ ಆ್ಯಪ್​ನ್ನು ಡಿಲೀಟ್​ ಮಾಡಲು ಆಗದ ರೀತಿಯಲ್ಲಿ ಇನ್​ಸ್ಟಾಲ್​ ಮಾಡುವಂತೆ ಎಲ್ಲಾ ಸ್ಮಾರ್ಟ್​ಫೋನ್​ ತಯಾರಕಾ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಈ ಆ್ಯಪ್​ನ ಸಹಾಯದಿಂದ ಯಾವುದೇ ಮೊಬೈಲ್​ಗಳಲ್ಲಿ ಸೈಬರ್​ ವಂಚನೆ ನಡೆಯದಂತೆ ತಡೆಯಬಹುದಾಗಿದೆ.

Also Read: Bombay Name Change : ಐಐಟಿ ಬಾಂಬೆ ಐಐಟಿ ಮುಂಬೈ ಆಗುತ್ತಾ? ಶುರುವಾಗಿದೆ ಹೆಸರು ಬದಲಾವಣೆಯ ಚರ್ಚೆ!

ನವೆಂಬರ್​ 28ರಂದು ಈ ಆದೇಶ ನೀಡಲಾಗಿದ್ದು ಸ್ಮಾರ್ಟ್​ಫೋನ್​ ತಯಾರಕ ಕಂಪನಿಗಳಿಗೆ 90 ದಿನಗಳ ಸಮಯಾವಕಾಶ ನೀಡಿದೆ. ಅಲ್ಲದೇ ಈಗಾಗಲೇ ಮಾರಾಟವಾಗಿರುವ ಮೊಬೈಲ್​ಗಳಲ್ಲಿಯೂ ಈ ಆ್ಯಪ್​​ ಅಳವಡಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

ಒಮ್ಮೆ ಈ ಆ್ಯಪ್​ ಇನ್​ಸ್ಟಾಲ್​ ಮಾಡಿದ ಬಳಿಕ ಮತ್ತೆಂದೂ ಡಿಲೀಟ್​ ಆಗದ ರೀತಿಯಲ್ಲಿ ಮೊಬೈಲ್​ಗಳ ಸಾಫ್ಟ್​ವೇರ್​ಗಳಲ್ಲಿ ಬದಲಾವಣೆ ತರುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

Exit mobile version