2011ಕ್ಕೂ ಮೊದಲು ನೇಮಕಗೊಂಡ ಶಿಕ್ಷಕರಿಗೆ ಹೊಸ ನಿಯಮ : ಬಡ್ತಿ ಬೇಕೆಂದರೆ ಈ ಅರ್ಹತೆ ಇರುವುದು ಕಡ್ಡಾಯ

TET For Teachers: ಬಡ್ತಿ ಪಡೆಯಬೇಕು ಎಂಬ ಅಭಿಲಾಷೆ ಹೊಂದಿರುವ ಶಿಕ್ಷಕರು ಕಡ್ಡಾಯವಾಗಿ ಟಿಇಟಿ ಉತ್ತೀರ್ಣರಾಗಿರಬೇಕು ಎಂದು ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ಸ್ಪಷ್ಟನೆ ನೀಡಿದೆ. 2011ಕ್ಕಿಂತ ಮೊದಲು ನೇಮಕಗೊಂಡಿರುವ ಶಿಕ್ಷಕರಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ.
1 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿರುವ ಶಿಕ್ಷಕರಿಗೆ ಟಿ.ಇ.ಟಿ ಕಡ್ಡಾಯ ಅರ್ಹತೆ ಆಗಿರಲಿದೆ. ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ ಕಾಯ್ದೆ, 2009) ಮತ್ತು ಎನ್ಸಿಟಿಇಯ 2010 ರ ಮಾರ್ಗಸೂಚಿಗಳನ್ನು ಉಲ್ಲೇಖಿಸಿದ ಕೇಂದ್ರ ಶಿಕ್ಷಣ ಸಚಿವಾಲಯವು ಶಿಕ್ಷಕ ಸ್ಥಾನ ಉಳಿಸಿಕೊಳ್ಳಲು ಇದು ಕಡ್ಡಾಯ ಅರ್ಹತೆ ಆಗಿರಲಿದೆ ಎಂದು ಹೇಳಿದೆ.
ನಿವೃತ್ತಿಗೆ 5 ವರ್ಷಗಳಿಗಿಂತ ಹೆಚ್ಚಿನ ಸಮಯ ಇರುವ ಶಿಕ್ಷಕರು ಮುಂದಿನ 2 ವರ್ಷದ ಒಳಗಾಗಿ ಕಡ್ಡಾಯವಾಗಿ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಒಂದು ವೇಳೆ ಟಿ.ಇ.ಟಿ ಪರೀಕ್ಷೆ ಉತ್ತೀರ್ಣರಾಗದೇ ಹೋದಲ್ಲಿ ಅವರ ಉದ್ಯೋಗಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಆದರೆ ನಿವೃತ್ತಿಗೆ ಐದು ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿ ಹೊಂದಿರುವ ಶಿಕ್ಷಕರು ಈ ನಿಯಮಾವಳಿಯಿಂದ ವಿನಾಯಿತಿ ಪಡೆದಿದ್ದಾರೆ.

ಇದನ್ನೂ ಓದಿ: ವಿದ್ಯಾಸಿರಿ ವಿದ್ಯಾರ್ಥಿ ವೇತನ ಯೋಜನೆ: ಪ್ರತಿ ತಿಂಗಳು 1,500 ರೂಪಾಯಿ ಪಡೆಯಲು ಹೀಗೆ ಮಾಡಿ

ಎಷ್ಟೇ ಅನುಭವ ಇದ್ದರೂ ಟಿಇಟಿ ಉತ್ತೀರ್ಣರಾಗದೇ ಹೋದಲ್ಲಿ ಬಡ್ತಿ ನೀಡಲು ಸಾಧ್ಯವೇ ಇಲ್ಲ ಎಂದು ಸುಪ್ರೀಂ ಹೇಳಿದೆ. ಹೀಗಾಗಿ ತಮ್ಮ ಉದ್ಯೋಗವನ್ನು ಉಳಿಸಿಕೊಳ್ಳಲು ಶಿಕ್ಷಕರು ಕಡ್ಡಾಯವಾಗಿ ಟಿ.ಇ.ಟಿ ಪರೀಕ್ಷೆ ಎದುರಿಸಲೇಬೇಕಿದೆ.

Exit mobile version