ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಸಂಕೇತ್​ ಕೊಲೆ ಪ್ರಕರಣ : ಅನ್ಯಕೋಮಿನ ಐವರು ವಿದ್ಯಾರ್ಥಿಗಳು ವಶಕ್ಕೆ

ಶಿವಮೊಗ್ಗ ಹೊರವಲಯದ ಸೂಳೆಬೈಲು ಗ್ರಾಮದ ಎಸ್​.ಎಸ್​.ಎಲ್​.ಸಿ ವಿದ್ಯಾರ್ಥಿ ಸಂಕೇತ್​ ಕೊಲೆ ಪ್ರಕರಣ ಸಂಬಂಧ ತುಂಗಾ ನಗರದ ಪೊಲೀಸರು ಇದೇ ಗ್ರಾಮದ ಐವರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ಈ ಬಾಲಕರೇ ಸಂಕೇತ್​ನನ್ನು ಕೊಲೆಗೈದಿದ್ದು ಪೊಲೀಸರು ಆರೋಪಿಗಳನ್ನು ತನಿಖೆಗೆ ಒಳಪಡಿಸಿದ್ದಾರೆ.
ಇತ್ತ ಮೃತ ಸಂಕೇತ್​ ಶವವನ್ನು ಶಿವಮೊಗ್ಗದ ಮೆಗ್ಗಾನ್​ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು ಬಳಿಕ ಕುಟುಂಬಸ್ಥರಿಗೆ ಮೃತದೇಹ ರವಾನೆ ಮಾಡಲಾಗಿದೆ. ಶವಾಗಾರದ ಎದುರು ಬಿಗಿ ಪೊಲೀಸ್​ ಬಂದೋಬಸ್ತ್​ ಕೈಗೊಳ್ಳಲಾಗಿದ್ದು ಸಂಕೇತ್​ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

ಏನಿದು ಪ್ರಕರಣ ?
ಎಸ್​.ಎಸ್​.ಎಲ್​.ಸಿ ವಿದ್ಯಾರ್ಥಿಯಾಗಿದ್ದ ಸಂಕೇತ್​ ನಿನ್ನೆ ರಾತ್ರಿ ಸ್ಪೆಶಲ್​ ಕ್ಲಾಸ್​ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಇತರ ವಿದ್ಯಾರ್ಥಿಗಳು ಜಗಳ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ್ದ. ಈ ಜಗಳ ಬಿಡಿಸಲು ಹೋಗಿದ್ದ ಸಂಕೇತ್​ ಎದೆಗೆ ನಾಲ್ವರು ವಿದ್ಯಾರ್ಥಿಗಳು ಬಲವಾಗಿ ಗುದ್ದಿದ್ದರು. ಪ್ರಜ್ಞೆ ಕಳೆದುಕೊಂಡಿದ್ದ ಬಾಲಕ ಸಂಕೇತ್​ನನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯ್ತಾದಾರೂ ಆತ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದ.

ಇದನ್ನೂ ಓದಿ: Kundapur Bus Accident : ಕುಂದಾಪುರ : ವಿದ್ಯಾರ್ಥಿಗಳಿದ್ದ ಬಸ್ ಉರುಳಿ ಅಪಘಾತ, ತಪ್ಪಿದ ಭಾರೀ ಅನಾಹುತ

ಈ ಬಾಲಕರೆಲ್ಲರೂ ಅದೇ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಗಲಾಟೆಯಲ್ಲಿ ಸಂಕೇತ್​ ಮತ್ತು ಗಿರೀಶ್​ ಎಂಬವರಿಗೆ ಗಾಯಗಳಾಗಿದೆ. ಗಿರೀಶ್​ನನ್ನು ಬಚಾವ್​ ಮಾಡಲು ಹೋದ ಸಂಕೇತ್​ ಮೇಲೆ ಅನ್ಯಕೋಮಿನ ಐವರು ಬಾಲಕರು ಹಲ್ಲೆ ನಡೆಸಿದ್ದರು. ಸದ್ಯ ಈ ಐವರು ಅನ್ಯಕೋಮಿನ ಬಾಲಕರನ್ನು ತುಂಗಾ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Exit mobile version